ದೊಡ್ಡವರು ಸಣ್ಣವರಾಗುವುದೇಕೆ?

ಪ್ರಿಯ ಸಖಿ,
ದೊಡ್ಡವರು ಸಣ್ಣವರಾಗುವುದು ಯಾವಾಗ? ಎನ್ನುವುದನ್ನು ಕವಿ ಸುಮತೀಂದ್ರ ನಾಡಿಗರು ತಮ್ಮ ದೊಡ್ಡವರು ಕವನದಲ್ಲಿ ಹೀಗೆ ವಿವರಿಸುತ್ತಾರೆ.
ದೊಡ್ಡವರು ಸಣ್ಣವರಾಗುವುದು
ತಾವೆಲ್ಲ ಮಾಡಿದ್ದೇವೆ, ತಾವೆಲ್ಲ ಮಾಡಿದ್ದೇವೆ
ತಮೆಗೆಲ್ಲ ಗೊತ್ತಿದೆ ಎಂದು ತಿಳಿದುಕೊಂಡಾಗ
ತಮ್ಮ ನಂತರ ಮುಂದೆ
ಪ್ರಲಯವೇ ಎಂದು ಭಾವಿಸಿದಾಗ
ಸಾಮಾನ್ಯವಾಗಿ ಹಿರಿಯರು ನಮ್ಮ ಕಾಲದಲ್ಲಿ ಹೀಗಿತ್ತು ನಮ್ಮ ಕಾಲವೇ ಚೆನ್ನ, ಕಾಲ ಕೆಟ್ಟು ಹೋಯ್ತು, ಮುಂದೆ ಭವಿಷ್ಯವೇ ಕಾಣುತ್ತಿಲ್ಲ ಇತ್ಯಾದಿ ಮಾತನಾಡುತ್ತಿರುತ್ತಾರೆ. ಹಾಗೆಂದು ಬದಲಾವಣೆಯೇ ಇಲ್ಲದೇ ಇರಲು ಬದುಕು ನಿಂತ ನೀರಲ್ಲ. ಈ ದೊಡ್ಡವರು ಹಿಂದೊಮ್ಮೆ ಚಿಕ್ಕವರಾಗಿದ್ದರು ಆಗಲೂ ಅವರ ಹಿರಿಯರು ಇವರನ್ನು ಇದೇ ಮಾತುಗಳಿಂದ ಚುಚ್ಚುತ್ತಿದ್ದರು ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು. ತಾವೆಲ್ಲ ಎಲ್ಲವನ್ನೂ ಮಾಡಿಬಿಟ್ಟಿದ್ದೇವೆ,  ಬದುಕಿನಲ್ಲಿ ಎಲ್ಲವೂ ನೋಡಿದ್ದೇವೆ. ನಮಗೆ ಪ್ರಪಂಚದ ಆಗು ಹೋಗುಗಳೆಲ್ಲ ತಿಳಿದಿದೆ, ತಮ್ಮ ನಂತರ ಮುಂದೆ ಬದುಕೆಂಬುದಕ್ಕೆ ಅರ್ಥವೇ ಇಲ್ಲ ಎಂದು ಕಿರಿಯರನ್ನು ತಾತ್ಸಾರದಿಂದ ಕಾಣಲಾರಂಭಿಸಿದಾಗ, ದೊಡ್ಡವರು ಸಣ್ಣವರಾಗುತ್ತಾ ಹೋಗುತ್ತಾರೆಂದು ಕವಿ ಹೇಳುತ್ತಾರೆ. ನಂತರ, ಮುಂದುವರಿಯುತ್ತಾ ಹೀಗೆ ಪ್ರಶ್ನಿಸುತ್ತಾರೆ.
ನಿಮ್ಮ ನಂತರ ಬೀಜ ಮೊಳೆಯುವದಿಲ್ಲವೇ ಸ್ವಾಮಿ?
ಸಸಿ ಬೆಳೆಯುವುದಿಲ್ಲವೇ?
ಸೂರ್ಯ ಮೇಲೆದ್ದಾಗ ನೀರು
ಥಳಥಳಿಸುತ್ತ ಹೊಳೆಯುವುದಿಲ್ಲವೇ?
ರವಿಬಿಂಬ ಕಣ್ಣುಗಳ ಕುಕ್ಕುವುದೇ ಇಲ್ಲವೇ?
ಸಖಿ, ಬದುಕು ಎಲ್ಲಿಯೋ ಒಂದು ಕಡೆ ನಿಂತುಹೋಗುವುದಿಲ್ಲ. ಅದು ನಿರಂತರವಾಗಿ ಚಲಿಸುತ್ತಲೇ ಇರುತ್ತದೆ. ಹಾಗೇ ಹೊಸತೆನ್ನುವುದೂ ಇಲ್ಲಿ ಅನಿವಾರ್ಯ. ಕಾಲಕ್ಕೆ ತಕ್ಕಂತೆ ಪರಿಸ್ಥಿತಿಗೆ ಹೊಂದಿಕೊಂಡು ಕಾಲನೊಂದಿಗೇ ಮುಂದೆ ಹೋಗುವವನು ವಿವೇಚನಾ ಶೀಲನೆನಿಸಿಕೊಳ್ಳುತ್ತಾನೆ. ಅದು ಬಿಟ್ಟು ನನ್ನ ಕಾಲದ್ದೇ ಸರಿ ಮುಂದಿನ ಬದುಕು ಸರಿಯಲ್ಲ ನಾನು ನಿಂತಲ್ಲೇ ನಿಂತಿರುತ್ತೇನೆ ಎಂದರೆ ಕಾಲ ಅವನನ್ನು ಹಿಂದೆ ತಳ್ಳಿ ತಾನು ಮುಂದೋಡುತ್ತದೆ! ಅಲ್ಲವೇ ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಟಾಮೀ ಟಾಮೀ ನಮ್ಮನೆ ನಾಯಿ
Next post ಓಡಿ ಬಾ

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

cheap jordans|wholesale air max|wholesale jordans|wholesale jewelry|wholesale jerseys